For a better experience please change your browser to CHROME, FIREFOX, OPERA or Internet Explorer.
Shambur, Bantwal based businessman Gopalakrishna Rai and Namish were found dead.

Shambur, Bantwal based businessman Gopalakrishna Rai and Namish were found dead.

ಎರಡು ವಾರಗಳ ಬಳಿಕ ಶಂಭೂರಿನ ಗೋಪಾಲಕೃಷ್ಣ ರೈ ಹಾಗೂ ನಮೀಶ್ ಮೃತದೇಹ ಪತ್ತೆ.

ದಿನಾಂಕ 16 ಫೆಬ್ರವರಿ 2020 ರ ಮುಂಜಾವಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಹಾಗೂ ತೊಕ್ಕೊಟ್ಟು ನೇತ್ರಾವತಿ ಸೇತುವೆಯ ಮೇಲೆ ಪೋಲಿಸರಿಗೆ ಸಿಕ್ಕ ಕಾರು ಹಾಗೂ ಡೆತ್ ನೋಟ್ ನ ಆಧಾರದಲ್ಲಿ ಆತ್ಮಹತ್ಯೆಗೈದಿದ್ದಾರೆ ಎನ್ನಲಾಗಿದ್ದ ಶಂಭೂರು ಮೂಲದ ಉದ್ಯಮಿ ಗೋಪಾಲಕೃಷ್ಣ ಹಾಗೂ ಅವರ ಪುತ್ರ ನಮೀಶ್ ಅವರ ಮೃತದೇಹ ಉಡುಪಿಯ ಕಾಪು ಸಮುದ್ರತೀರದ ಕಲ್ಲಿನ ಸೆರೆಯಲ್ಲಿ, ಕೊಳೆತ ಸ್ಥಿತಿಯಲ್ಲಿ ನಿನ್ನೆ ಸಂಜೆ ಪತ್ತೆಯಾಗಿದೆ.

For ENGLISH content CLICK HERE.

28 ಫೆಬ್ರವರಿ ಸಂಜೆ ಉಡುಪಿಯ ಕಾಪು- ಕಟಪಾಡಿ ಸಮುದ್ರ ತೀರದಲ್ಲಿ ದೊರೆತ 2 ಮೃತದೇಹಗಳನ್ನು ಒಬ್ಬ ತಾಯಿ ಮತ್ತು ಮಗುವಿನ ಮೃತದೇಹ ಎಂದು ಶಂಕಿಸಲಾಗಿದ್ದು ತದನಂತರ ಮಗುವಿನ ಕತ್ತಿನಲ್ಲಿದ್ದ ಚಿನ್ನದ ಸರ, ಶೂ ಮತ್ತು ಮೈಮೇಲಿನ ಬಟ್ಟೆಯನ್ನು ಪರಿಶೀಲಿಸಿ, ಸಂಬಂಧಿಕರು ಗುರುತಿಸಿದ ನಂತರ ಅದು ಗೋಪಾಲಕೃಷ್ಣ ರೈ ಹಾಗೂ ಅವರ ಪುತ್ರ ನಮೀಶ್ ಇವರ ಮೃತದೇಹಗಳು ಎಂದು ಖಚಿತಪಡಿಸಲಾಗಿದೆ. ಆತ್ಮಹತ್ಯೆಯ ಸಮಯದಲ್ಲಿ ಗೋಪಾಲಕೃಷ್ಣ ರೈ ತನ್ನ ಮಗುವನ್ನು ಹೊಟ್ಟೆಗೆ ಕಟ್ಟಿದ್ದರಿಂದ ತಂದೆ-ಮಗುವಿನ ಮೃತದೇಹಗಳು ಒಟ್ಟಿಗೆ ಪತ್ತೆಯಾಗಿವೆ.

ಕಾಪು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದು ಕಾನೂನು ಕ್ರಮಗಳನ್ನು ಪಾಲಿಸಿದ ನಂತರ ಇಂದು ಮುಂಜಾನೆ 10 ಗಂಟೆಯ ಸುಮಾರಿಗೆ (ಶನಿವಾರ 29, 2020) ಅವರ ಶಂಭೂರಿನ ನಿವಾಸಕ್ಕೆ ಮೃತದೇಹವನ್ನು ತರಲಾಗುವುದು ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಹಿಂದಿನ ವರದಿ:  ಶಂಭೂರು ಮೂಲದ ತಂದೆ ,ಮಗನ ಆತ್ಮಹತ್ಯೆ. ನೇತ್ರಾವತಿ ಸೇತುವೆಯಲ್ಲಿ ಕಾರು ಮತ್ತು ಡೆತ್ ನೋಟ್ ಪತ್ತೆ.

1 2

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts